Slide
Slide
Slide
previous arrow
next arrow

ವಿಕ ಕಿರು ಚಿತ್ರೋತ್ಸವ-2023: ನಾಗರಾಜ ನಾಯ್ಕ ಮುಡಿಗೇರಿದ ಅತ್ಯುತ್ತಮ ನಟ ಪ್ರಶಸ್ತಿ

300x250 AD

ಶಿರಸಿ: ವಿಜಯ ಕರ್ನಾಟಕ ಪತ್ರಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 6 ನೇ ವಿಕ ಕಿರು ಚಿತ್ರೋತ್ಸವ 2023 ರಲ್ಲಿ ಶಿರಸಿಯ ನಾಗರಾಜ ನಾಯ್ಕ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡು ಹೆಮ್ಮೆ ತಂದಿದ್ದಾರೆ.‌

ತಾಲೂಕಿನ ಬರೂರಿನವರಾದ ನಾಗರಾಜ ನಾಯ್ಕ ಕಳೆದ ಕೆಲವು ವರ್ಷಗಳಿಂದ ಧಾರವಾಹಿ, ಕಿರು ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತ ಬಂದಿದ್ದು, ಅದರ ಪ್ರತಿಫಲವಾಗಿ ಉತ್ತಮ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಇತ್ತೀಚಿಗೆ  ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಚಿತ್ರೋತ್ಸವಕ್ಕೆ 59 ಕಿರುಚಿತ್ರಗಳು ಸ್ಪರ್ಧಿಸಿದ್ದು, ಶಿರಸಿ ತಾಲೂಕಿನ ಹೆಗ್ಗರಣಿಯ ವಿಘ್ನೇಶ ಗೌಡ ನಿರ್ದೇಶಿಸಿದ ಹಿಸ್ಸೆ ಕಿರುಚಿತ್ರಕ್ಕೆ ಎರಡು ಪ್ರಶಸ್ತಿಗಳು ಬಂದಿವೆ‌. ಅದರಲ್ಲಿ ಅತ್ಯುತ್ತಮ ಸಿನೆಮಾಟೋಗ್ರಾಫಿ  ಗಣೇಶ ಭಟ್ಟ ಮತ್ತು ಅತ್ಯುತ್ತಮ ನಟ ಪ್ರಶಸ್ತಿಯನ್ನು ನಾಗರಾಜ ನಾಯ್ಕ ಅವರಿಗೆ ಸಂದಿದೆ. ರೆಬೆಲ್ ಸ್ಟಾರ್ ಅಂಬರೀಶ ಅವರ ಮಗ ಅಭಿಷೇಕ ಅಂಬರೀಶ ಅವರಿಂದ ನಾಗರಾಜ ನಾಯ್ಕ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ.

300x250 AD


ಶಿರಸಿಯವನಾಗಿ ಬೆಂಗಳೂರಿನಲ್ಲಿ ಪ್ರತಿಭೆ ಪ್ರದರ್ಶಿಸಲು ನನಗೆ ಉತ್ತಮ ಅವಕಾಶ ದೊರೆತಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಶಿರಸಿಯ ಕೀರ್ತಿ ಹೆಚ್ಚಿಸಲು ಪ್ರಯತ್ನಿಸುತ್ತೇನೆ.
       – ನಾಗರಾಜ ನಾಯ್ಕ (ಪ್ರಶಸ್ತಿ ವಿಜೇತ)

Share This
300x250 AD
300x250 AD
300x250 AD
Back to top